“ಜಾತಸ್ಯ ಮರಣಂ ಧ್ರುವಂ” ಎಂಬ ಮಾತಿನಂತೆ ಹುಟ್ಟಿದ ಪ್ರತಿಯೊಬ್ಬ ಜೀವಿಯ ತನ್ನ ಕರ್ತವ್ಯವನ್ನು ನಿರ್ವಹಿಸಿದ ನಂತರ ಜೀವವನ್ನು ತ್ಯಾಗ ಮಾಡಲೇಬೇಕು. ಈ ಹುಟ್ಟು ಸಾವಿನ ನಡುವಿನ ಜೀವನದಲ್ಲಿ ಜನಾನುರಾಗಿಯಾಗಿ,ನಮ್ಮ ಯುವಕ ಮಂಡಲದ ಹಿರಿಯ ಸದಸ್ಯರಾಗಿ, ನಮ್ಮೆಲ್ಲರನ್ನು ತನ್ನ ಹಾಸ್ಯ ಚಟಾಕಿಯಲ್ಲಿ ನಗಿಸುತ್ತ, ನಾವು ಮಾಡುವ ಕಲಾ ಸೇವೆಯಲ್ಲಿ ನಮ್ಮೊಂದಿಗೆ ಹಾಸ್ಯ ಕಲಾವಿದರಾಗಿ ನಟಿಸಿ, ನಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಮಗೆ ಮಾರ್ಗದರ್ಶನ ನೀಡುತ್ತಿದ್ದ ನಮ್ಮ ಆತ್ಮೀಯರಾದ, ಇಂದು ತನ್ನ ದೇಹ ತ್ಯಾಗ ಮಾಡಿ ಸ್ವರ್ಗಸ್ತರಾದ ಶ್ರೀ ದೇಜಪ್ಪ ಪೂಜಾರಿ ತಾಳಿತ್ತಬೆಟ್ಟು ಅವರ ಆತ್ಮಕ್ಕೆ ಶ್ರೀ ಸೋಮನಾಥ ಶಾಂತಿಯನ್ನು ನೀಡಲೆಂದು ಆಶಿಸುವ.
-ಅಧ್ಯಕ್ಷರು ಮತ್ತು ಸರ್ವ ಸದಸ್ಯರು
ಯುವಕ ಮಂಡಲ (ರಿ.) ಇರಾ
