ಮಂಗಳೂರು ಸೈಂಟ್ ಆಗ್ನೆಸ್ ಕಾಲೇಜ್ ಮತ್ತು ಇರಾ ಪಂಚಾಯತ್, ಇರಾ ಯುವಕ ಮಂಡಲ(ರಿ) ಹಾಗೂ ಇರಾ ಗ್ರಾಮಸ್ಥರ ಒಗ್ಗೂಡುವಿಕೆಯಿಂದ ದಿನಾಂಕ ಜನವರಿ 24 ರಿಂದ 31 ರ ವರೆಗೆ ನಡೆಯುವ ಎನ್ ಎಸ್ ಎಸ್ ವಿಶೇಷ ಶಿಬಿರದ ನಡೆಸುವ ಬಗ್ಗೆ ಇರಾ ತಾಳಿತ್ತಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಗ್ನೇಸ್ ಡಿಸೋಜ, ಉಪಾಧ್ಯಕ್ಷರಾದ ಮೊಯಿದಿನ್ ಕುಂಞಿ, ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ರಝಾಕ್ ಕುಕ್ಕಾಜೆ, ಕೆ.ಟಿ. ಸುಧಾಕರ, ಸದಸ್ಯರಾದ ಶ್ರೀಮತಿ ವಾಣಿಶ್ರೀ, ಶ್ರೀಮತಿ ನಿರ್ಮಲ, ಶ್ರೀಮತಿ ರೇಣುಕಾ,ಶ್ರೀಮತಿ ಚಂದ್ರಪ್ರಭಾ, ಇರಾ ತಾಳಿತ್ತಬೆಟ್ಟು ಶಾಲೆಯ ಮುಖ್ಯೋಪಾದ್ಯಾಯಿನಿ ಶ್ರೀಮತಿ ಸೋನಿತ, ಯುವಕ ಮಂಡಲ(ರಿ.)ಇರಾ ಇದರ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ, ಇರಾ ಶಾಲಾ ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮುರಳೀಧರ ಭಂಡಾರಿ,ಆಗ್ನೇಸ್ ಕಾಲೇಜ್ ನ ಉಪಪ್ರಾಂಶುಪಾಲರಾದ ಸಿಸ್ಟರ್ ಕ್ಲಾರಾ, ಅಧಿಕಾರಿಗಳಾದ ಡಾ!! ಉದಯಕುಮಾರ್, ಶ್ರೀಮತಿ ಮೀರಾ ದೇವಿ, ಮಿಸ್ ಪ್ರೀತಾ ಉಪಸ್ಥಿತರಿದ್ದರು
