ಯುವಕ ಮಂಡಲ (ರಿ.) , ಇರಾ

ಇದು ಯುವ ಶಕ್ತಿಯ ಕೇಂದ್ರ


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಗಣೇಶ ಚತುರ್ಥಿಯ‌ ಕ್ರೀಡಾ ಕೂಟ

ಯುವಕ‌ ಮಂಡಲ (ರಿ.) ಇರಾ ಇದರ ವತಿಯಿಂದ‌ ನಡೆದ 49 ನೇ‌ ವರ್ಷದ ಕ್ರೀಡಾ ಕೂಟ ಇರಾ ಶಾಲಾ ಮೈದಾನದಲ್ಲಿ ನಡೆಯಿತು.‌ ಮಕ್ಕಳಿಗೆ ಹಾಗು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಹಾಗು ತೀರ್ಪುಗಾರರಾಗಿ ಭಾಗವಹಿಸಿದ ಶ್ರೀ ಅಶೋಕ್ ನಾಯಕ್ ನಾಡಾಜೆ ಅವರು ಯುವಕ ಮಂಡಲದ ಕಾರ್ಯಕ್ರಮವನ್ನು ಶ್ಲಾಘಿಸಿದರು. ಸಮಾರೋಪ ಸಮಾರಂಭದಲ್ಲಿ ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಜಯರಾಮ್ ಪೂಜಾರಿ, ಕಾರ್ಯದರ್ಶಿ ಗಳಾದ ಗಣೇಶ್ ಕೊಟ್ಟಾರಿ, ಇರಾ ಶ್ರೀ ಸೋಮನಾಥೇಶ್ವರ ಸೇವಾ‌ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಕುಂಡಾವು, ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಸೂರ್ಯಪ್ರಕಾಶ್ ರೈ, ಇರಾ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರತಾಪ್ ಚಂದ್ರ, ಶ್ರೀ ರಮೇಶ್ ಪೂಜಾರಿ, ಇರಾ ಶಾಲಾಭಿವೃದ್ದಿ ಸಮಿತಿಯ ಶ್ರೀ ಹಬೀಬ್ ರಹಿಮಾನ್ , ಯುವಕ‌ ಮಂಡಲದ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ಹಾಗು ಯುವಕ ಮಂಡಲದ ಸರ್ವಸದಸ್ಯರು ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯರಾದ ನಿತೇಶ್ ಶೆಟ್ಟಿ ಹಾಗು ವರದರಾಜ‌ ಎಂ ಇವರು ಕಾರ್ಯಕ್ರಮ ನಿರೂಪಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ

ಯಕ್ಷ ವಾಙ್ಮಯಿ, ಅಭಿನಯ ಚಕ್ರವರ್ತಿ ಪುಷ್ಪರಾಜ್ ಕುಕ್ಕಾಜೆ

ಪುಷ್ಪರಾಜ್ ಕುಕ್ಕಾಜೆ ಹವ್ಯಾಸಿ ಯಕ್ಷಗಾನ ಕಲಾವಿದರಲ್ಲಿ ಮೇರುಪಂಕ್ತಿಯ ಕಲಾವಿದರು. 1954 ರಲ್ಲಿ ಸ್ಥಾಪಿತವಾದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳದವರು ಇತ್ತೀಚೆಗೆ ನಡೆಸಿದ ಯಕ್ಷ ವಾಙ್ಮಯ 2020 ಸ್ಪರ್ಧೆಯಲ್ಲಿ ,61 ಸ್ಪರ್ದಿಗಳೆದುರು ಪ್ರಥಮ ಸ್ಥಾನ ಪಡೆದ ಪುಷ್ಪರಾಜರು ಕುಕ್ಕಾಜೆಯ ಹೆಮ್ಮೆ. ಇವರನ್ನು ಯಕ್ಷಗಾನ ರಂಗಕ್ಕೆ ಪರಿಚಯಿಸಿದರು ನಿವೃತ್ತ ಮುಖ್ಯೋಪಾಧ್ಯಾಯರಾದ ದಿ.ಮೇರಾವು ಮಹಾಬಲ ರೈಗಳು,ನಾಟ್ಯ ಕಲಿಸಿದವರು ಕಲಾವಿದರಾದ ಶ್ರೀಧರ ಪಂಜಾಜೆ ಇವರು. ಶ್ರೀ ಬಿ. ಚಂದ್ರಶೇಖರ ರಾವ್ ಕುಕ್ಕಾಜೆ ಹಾಗು ಶ್ರೀ ದೂಮಣ್ಣ ರೈ ಕುಕ್ಕಾಜೆ ಇವರ ತಾಳಮದ್ದಳೆ ಗುರುಗಳಾಗಿದ್ದಾರೆ. 1993ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂಧರ್ಭದಲ್ಲಿ ನಡೆದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ 77 ಸ್ಪರ್ದಿಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಇವರ ಪ್ರೌಢಿಮೆಗೆ ಸಾಕ್ಷಿ. ಯಕ್ಷಗಾನ ಮಾತ್ರವಲ್ಲದೆ ನಾಟಕ ರಂಗದಲ್ಲೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದು, ಯಕ್ಷಗಾನ ಸಂಘಟಕರಾಗಿಯೂ, ಕಾರ್ಯಕ್ರಮ ನಿರೂಪಕರಾಗಿಯೂ ಸೈ ಎನಿಸಿಕೊಂಡಿದ್ದಾರೆ.ಹವ್ಯಾಸಿ ಯಕ್ಷಗಾನ ರಂಗದಲ್ಲಿ 37 ವರ್ಷದ ಸಾರ್ಥಕ ಸೇವೆ ಸಲ್ಲಿಸಿದ್ದು, ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಮಂಚಿ ಘಟಕದ ಮಾರ್ಗದರ್ಶಕರಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಕರಿಸುತ್ತಿದ್ದಾರೆ.ಮಂಚಿ ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಮಾಡದ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಚಿ ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಂಘವನ್ನು ಮುನ್ನಡೆಸುವಲ್ಲಿ ಇವರ ಸಾಧನೆ ಅಪರಿಮಿತವಾದದ್ದು. ಇಷ್ಟೆಲ್ಲಾ ಸಾಧನೆಗಳ ನಡುವೆಯೂ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸಮಾಜ ಸೇವೆ ಹಾಗು ಕಲಾ ಸೇವೆ ಮಾಡುತ್ತಿರುವ ಶ್ರೀ ಪುಷ್ಪರಾಜ್ ಕುಕ್ಕಾಜೆ ಇವರಿಗೆ ಇರಾ ಯುವಕ ಮಂಡಲದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.

 

2cbfd889ca8047629f3537604efa9cdfFB_IMG_1594634045394


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಕುಂಡಾವು ಇದರ ವಾರ್ಷಿಕ ಜಾತ್ರಾಮಹೋತ್ಸವದ ಕರೆಯೋಲೆ

ಇತಿಹಾಸ ಪ್ರಸಿದ್ಧ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ಕುಂಡಾವು ಇದರ ವಾರ್ಷಿಕ ಜಾತ್ರಾಮಹೋತ್ಸವ ಇದೇ ಬರುವ ಮಾರ್ಚ್ 5 ರಿಂದ 12ರ ತನಕ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ

– ಆಡಳಿತ ಸಮಿತಿ ಮತ್ತು ಸೇವಾ ಸಮಿತಿ, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ಕುಂಡಾವು ಹಾಗು ಊರ ಹತ್ತು ಸಮಸ್ತರು

-ಯುವಕ ಮಂಡಲ(ರಿ.) ಇರಾ

This slideshow requires JavaScript.


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಯುವಕ‌‌ ಮಂಡಲದ 46 ನೇ ವಾರ್ಷಿಕೋತ್ಸವ

ಯುವಕ ಮಂಡಲ(ರಿ.) ಇರಾ ಇದರ 46 ನೇ ವಾರ್ಷಿಕೋತ್ಸವ ಡಿಸೆಂಬರ್ 15, 2019ರಂದು ಯುವಕ ಮಂಡಲದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಶ್ರೀ ಅಬ್ದುಲ್ ರಝಾಕ್ ಕುಕ್ಕಾಜೆ ಮಾತನಾಡಿ ಇರಾ ಯುವಕ‌ ಮಂಡಲದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರೂ, ಮೊಕ್ತೇಸರರೂ ಅದ ಶ್ರೀ ಶಿವಾನಂದ ಮಯ್ಯ ಅವರನ್ನು ಸನ್ಮಾನಿಸಲಾಯಿತು. ಇದರ ಜತೆಗೆ ಊರಿನ ಯುವ ಸಾಧಕರಾದ ಶ್ರೀ ನಿಶಿತ್ ಭಂಡಾರಿ, ಧನುಷ್ ಮತ್ತು ವರ್ಷಿತ್ ನೋಂಡರನ್ನು ಗೌರವಿಸಲಾಯಿತು. ಜತೆಗ ಊರಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಈ ಸಂದರ್ಭದಲ್ಲಿ ಅತಿಥಿಗಳಾಗಿ ತಾಲೂಕ್ ಪಂಚಾಯತ್ ಅಧ್ಯಕ್ಷ ರಾದ ಶ್ರೀ ಚಂದ್ರಹಾಸ್ ಕರ್ಕೇರ, ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಶ್ರೀ ರಾಧಾಕೃಷ್ಣ ರೈ ಉಮಿಯ, ಶ್ರೀನಿಧಿ ರೋಲಿಂಗ್ ಶಟರ್ ಸಂಸ್ಥೆಯ ಮಾಲಿಕರಾದ ಶ್ರೀ ಉದಯ ಕುಮಾರ್ ರೈ ಅಗರಿ, ಎ.ಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜ್ ನ ಪ್ರಾಧ್ಯಾಪಕರಾದ ಶ್ರೀ ರಾಜೇಶ್ ರೈ ಅಗರಿ, ಯುವ ಉದ್ಯಮಿ ಸ್ಟೀಫನ್ ಪ್ರಕಾಶ್ ವೇಗಸ್ ,ಯುವಕ ಮಂಡಲದ ಅಧ್ಯಕ್ಷ ರಾದ ಶ್ರೀ ಚರಣ್ ಪಕ್ಕಳ, ಯುವಕ ಮಂಡಲದ ಸ್ಥಾಪಕ ಸದಸ್ಯರುಗಳಾದ ಶ್ರೀ ರಾಮಕೃಷ್ಣ ಸೂತ್ರಬೈಲು ಹಾಗು ಶ್ರೀ ಟಿ ಇಬ್ರಾಯಿ ಬ್ಯಾರಿ ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯರಾದ ಯತಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಿಖಿಲ್ ಕೊಟ್ಟಾರಿ ಅತಿಥಿಗಳನ್ನು ಸ್ವಾಗತಿಸಿದರು, ನಿತೇಶ್ ಶೆಟ್ಟಿ ಸಂಘದ ವಾರ್ಷಿಕ ವರದಿ ವಾಚಿಸಿದರು, ವರದರಾಜ ಎಂ ವಂದಿಸಿದರು‌. ಪುಷ್ಪರಾಜ ಕುಕ್ಕಾಜೆ ಸನ್ಮಾನಿತರನ್ನು ಪರಿಚಯಿಸಿದರು ಹಾಗು ಅಶ್ವಿತ್ ಕೊಟ್ಟಾರಿ ಇರಾ ಯುವ ಸಾಧಕರನ್ನು ಪರಿಚಯಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯುವಕ ಮಂಡಲದ ಸದಸ್ಯರಿಂದ ಯಕ್ಷಗಾನ ನಾಟ್ಯ ವೈವಿದ್ಯ ನಡೆಯಿತು. ಜತೆಗ ಲಕುಮಿ ತಂಡದ ಪ್ರಸಿದ್ಧ ನಾಟಕ ಗುಟ್ಟು ಗೊತ್ತಾಂಡ್ ಪ್ರದರ್ಶನಗೊಂಡಿತು.


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಪ್ರದರ್ಶನಗೊಂಡ ಯುವಕ ಮಂಡಲ ಪ್ರಾಯೋಜಿತ ಯಕ್ಷಗಾನ ಬಯಲಾಟ

ಯುವಕ ಮಂಡಲ(ರಿ.) ಇರಾ ಇದರ ವತಿಯಿಂದ ಗಣೇಶ ಚತುರ್ಥಿ ಯ ಪ್ರಯುಕ್ತ , ಜಿಲ್ಲೆಯ ಸುಪ್ರಸಿದ್ಧ ಕಲಾವಿದರನ್ನೊಳಗೊಂಡ ಯಕ್ಷಗಾನ‌ ” ಪಂಚವಟಿ-ಮಕರಾಕ್ಷ-ಇಂದ್ರಜಿತು” ದಿನಾಂಕ 08-09-2019 ರ ಭಾನುವಾರ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ರಾಜಾಂಗಣದಲ್ಲಿ ಬಹಳ ಅಧ್ದೂರಿಯಾಗಿ ಪ್ರದರ್ಶನಗೊಂಡಿತು. ರಸರಾಗ ಚಕ್ರವರ್ತಿ ಶ್ರೀ ದಿನೇಶ್ ಅಮ್ಮಣ್ಣಾಯ, ಕಂಚಿನ ಕಂಠದ ಶ್ರೀ ಪ್ರಸಾದ್ ಬಲಿಪ, ಯುವ ಭಾಗವತ ಶ್ರೀ ಪ್ರದೀಪ್ ಗಟ್ಟಿ ಯವರ ಸುಮಧುರ ಹಾಡುಗಾರಿಕೆಯೊಂದಿಗೆ , ಮಾತಿನ ಮಲ್ಲ ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ, ಅಕ್ಷಯ್ ಕಾರ್ನಾಡ್, ಪೆರ್ಮುದೆ, ರಂಗ ಸವ್ಯಸಾಚಿ ಸಂತೋಷ್ ಮಾನ್ಯ, ಹಾಸ್ಯಗಾರ ಮಹೇಶ್ ಮಣಿಯಾಣಿ, ವೆಂಕಟೇಶ್ ಕಲ್ಲುಗುಂಡಿ, ರಾಜೇಶ್ ಆಚಾರ್ಯ ಸಂಪಿಗೆ, ಪ್ರೇಮ್ ರಾಜ್ ಕೊಯ್ಲ, ಬಜಕೊಡ್ಲು, ಜತಗೆ ಊರಿನ ಪ್ರತಿಭೆ ಅಪತ್ಭಾಂದವ ಶ್ರೀ ಪುಷ್ಪರಾಜ್ ಕುಕ್ಕಾಜೆ ರಂಗಸ್ಥಳ ಅಲಂಕರಿಸಿದರು. ಕಳೆದ ಹತ್ತು ವರ್ಷಗಳಿಂದ ಯುವಕ‌ ಮಂಡಲ ನಡೆಸಿಕೊಂಡು ಬಂದಿರುವ ಈ ಯಕ್ಷಸೇವೆಗೆ ಹಲವು ಧಾನಿಗಳು ನೆರವು‌ ನೀಡಿರುತ್ತಾರೆ. ಈ ದಿನ ಸಂಪೂರ್ಣ ಸಹಕಾರ ನೀಡಿದ ಧಾನಿಗಳಾದ ಶ್ರೀಮತಿ ಮತ್ತು ಶ್ರೀ ಕೇಶವ ಶೆಟ್ಟಿ ಮೇರಾವು, ಕುರಿಯಾಡಿ ತೋಟ ಶ್ರೀಮತಿ ಮತ್ತು ಶ್ರೀ ಸತೀಶ್ ಶೆಟ್ಟಿ , ಶ್ರೀ ಮತಿ ಮತ್ತು ಶ್ರೀ ಚನಿಯಪ್ಪ ನಾಯ್ಕ ಹಾಗು ಸಂಘದ ಸಕ್ರೀಯ ಸದಸ್ಯರಾದ ಶ್ರೀಮತಿ ಮತ್ತು ಶ್ರೀ ಕೇಶವ ಭಂಡಾರಿಯವರನ್ನು ಊರಿನ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.


 


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಗಣೇಶ ಚತುರ್ಥಿ

ಯುವಕ‌ ಮಂಡಲ(ರಿ.) ಇರಾ ಇದರ ವತಿಯಿಂದ ನಡೆದ ಗಣೇಶ ಚತುರ್ಥಿ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಸಂಪನ್ನಗೊಂಡಿತು. ಗಣೇಶ ಚತುರ್ಥಿಯ ಅಂಗವಾಗಿ ಇರಾ ಶಾಲಾ ಮಕ್ಕಳಿಗೆ ಹಲವು ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಊರಿನ ಯುವಕರಿಗೆ ವಾಲಿಬಾಲ್ ,ಹಗ್ಗಜಗ್ಗಾಟದಂತಹ ಕ್ರೀಡೆಗಳನ್ನು ಆಯೋಜಿಸಿ ಕ್ರೀಡಾಸಕ್ತ ಯುವಕರನ್ನು ಪ್ರೋತ್ಸಾಹಿಸಲಾಯಿತು. ಕ್ರೀಡೆಯಲ್ಲಿ ವಿಜೇತರಾದವರಿಗೆ ನಮ್ಮ ಗ್ರಾಮದ ಪ್ರಥಮ ಪ್ರಜೆ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ , ನಮ್ಮ ಸಂಘದ ಸದಸ್ಯರೂ, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಪೂಜಾರಿ ಸಂಪಿಲ, ಗೋಪಾಲ ಅಶ್ವತ್ಥಡಿ, ಸಂಘದ ಹಿರಿಯ ಸದಸ್ಯರಾದ ಯತಿರಾಜ್ ಶೆಟ್ಟಿ, ಸುರೇಶ್  ಕೊಟ್ಟಾರಿ, ಸುರೇಶ್ ರೈ, ವಾಮನ ಪೂಜಾರಿ ಬಹುಮಾನ ವಿತರಿಸಿದರು. ಕೊನೆಗೆ‌ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನುವಹಿಸಿದ್ದ ಗ್ರಾಮ‌‌ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಜಾಕ್ ಕುಕ್ಕಾಜೆ ಯುವಕ‌ ಮಂಡಲದ ಕಾರ್ಯ ಚಟುವಟಿಕೆಗಳ ಶ್ಲಾಘಿಸಿದರು. ಸಂಘದ ಕಾರ್ಯದರ್ಶಿ ನಿತೇಶ್ ಶೆಟ್ಟಿ, ನಿಶಾನ್ ಕೊಟ್ಟಾರಿ ಕಾರ್ಯಕ್ರಮ‌ ನಿರೂಪಿಸಿದರು. ಅಧ್ಯಕ್ಷ ಚರಣ್ ಪಕ್ಕಳ ಅತಿಥಿಗಳನ್ನು ಸ್ವಾಗತಿಸಿದರು. ಕೋಶಾಧಿಕಾರಿ ವರದರಾಜ್ ವಂದಿಸಿದರು.‌ ಸಂಘದ ಎಲ್ಲಾ ಪಧಾದಿಕಾರಿಗಳು, ಸದಸ್ಯರು ಹಾಗು ಊರಿನ ಗಣ್ಯರು ಉಪಸ್ಥಿತರಿದ್ದರು.

IMG_20190902_103139IMG_20190902_103212IMG_20190902_105935IMG_20190902_105949IMG-20190902-WA0090IMG-20190902-WA0086IMG-20190902-WA0085IMG-20190902-WA0091IMG-20190902-WA0078IMG-20190902-WA0080


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಕರೆಯೋಲೆ

ಇತಿಹಾಸ ಪ್ರಸಿದ್ಧ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ಕುಂಡಾವು ಇದರ ವಾರ್ಷಿಕ ಜಾತ್ರಾಮಹೋತ್ಸವದ ಪ್ರಯುಕ್ತ ಯುವಕ ಮಂಡಲ(ರಿ.) ಇರಾ ಮತ್ತು ಸೋಮನಾಥೇಶ್ವರ ಸೇವಾ ಸಮಿತಿಯ ಪ್ರಾಯೋಜಕತ್ವದಲ್ಲಿ ದಿನಾಂಕ 18-02-2019 ರಂದು ರಾತ್ರಿ 8ಗಂಟೆಗೆ ಇರಾ ದೇವಳದ ವಠಾರದಲ್ಲಿ ತುಳು ಸಾಮಾಜಿಕ ಹಾಸ್ಯಮಯ ನಾಟಕ “ಬಂಜಿಗ್ ಹಾಕೊಡ್ಚಿ” ನಡೆಯಲಿದ್ದು ಕಲಾಭಿಮಾನಿಗಳಿಗೆ ಹಾರ್ಧಿಕ‌ ಸ್ವಾಗತ ಬಯಸುವ ಯುವಕ ಮಂಡಲ (ರಿ.) ಇರಾ.

img-20190112-wa0014


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಯುವಕ ಮಂಡಲದ ವಾರ್ಷಿಕೋತ್ಸವ

ಯುವಕ ಮಂಡಲ(ರಿ.) ಇರಾ ಇದರ 45 ನೇ ವಾರ್ಷಿಕೋತ್ಸವ ದಿನಾಂಕ 08-12-2018 ರ ಶನಿವಾರ ಯುವಕ ಮಂಡಲದ ವಠಾರರದಲ್ಲಿ ಯಶಸ್ವಿಯಾಗಿ ನಡೆಯಿತು.  ಕಾರ್ಯಕ್ರಮದ ಮೊದಲಿಗೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆವಹಿಸಿದ್ದರು, ಜತೆಗೆ ಅತಿಥಿಗಳಾಗಿ ಬಂಟ್ವಾಳ ತಾಲೂಕ್ ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಮೋಂತಿಮಾರ್ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಕಾಸ್ ಪುತ್ತೂರು, ಚಲನಚಿತ್ರ ನಿರ್ಮಾಪಕರಾದ ರವಿ ರೈ ಕಳಸ, ಲಕುಮಿ‌ ತಂಡದ‌ ಮಾಲಿಕರಾದ ಲ|ಕಿಶೋರ್ ಡಿ‌ ಶೆಟ್ಟಿ,  ಸಂಘಟನಾ ಪ್ರಮುಖರಾದ ಆನಂದ್ ಶೆಟ್ಟಿ ಅಡ್ಯಾರ್,  ಯುವಕ ಮಂಡಲದ ಸ್ಥಾಪಕ ಸದಸ್ಯರಾದ ವೆಂಕಪ್ಪ ಭಂಡಾರಿ, ಟಿ ಮೂಸಾ ಹಾಗು ಯುವಕ ಮಂಡಲದ ಪ್ರಸ್ತುತ ಅಧ್ಯಕ್ಷರಾದ ವಾಮನ ಡಿ ಉಪಸ್ಥಿತರಿದ್ದರು.  ಈ‌ ಸಂದರ್ಭದಲ್ಲಿ ಜಾನಪದ ಕ್ಷೇತ್ರದಲ್ಲಿ ಹಾಗು ದೈವ ನರ್ತನಾ ಸೇವೆಯಲ್ಲಿ ವಿಶಿಷ್ಠ ಛಾಪನ್ನು ಮೂಡಿಸಿದ ಶ್ರೀ ಲಕ್ಷ್ಮಣ ಯಾನೆ ಕಾಂತ ಕಣಂತೂರು ಅವರನ್ನು ಗೌರವಾಧರಗಳಿಂದ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಯುವಕ ಮಂಡಲದ ಕಿರಿಯ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ತದನಂತರ ಲಕುಮಿ ತಂಡದ ಕುಸಲ್ದ ಕಲಾವಿದರಿಂದ‌ “ಮಂಗೆ ಮಲ್ಪೊಡ್ಚಿ” ಎಂಬ ತುಳು ಹಾಸ್ಯಮಯ ಸಾಮಾಜಿಕ ನಾಟಕ ನಡೆಯಿತು.

ಛಾಯಾಚಿತ್ರ: ಅಪುಲ್‌ ಆಳ್ವ ಇರಾ


ನಿಮ್ಮ ಟಿಪ್ಪಣಿ ಬರೆಯಿರಿ

ತುಳು ರಂಗಭೂಮಿಯಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ನಿತೇಶ್ ಶೆಟ್ಟಿ

ಇರಾ ಯುವಕ ಮಂಡಲ ಹಲವು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದು, ಕಲಾ ಪೋಷಣೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇಂದು ನಮ್ಮ ಸಂಘದ ಯುವ ಸದಸ್ಯ ನಿತೇಶ್ ಶೆಟ್ಟಿ ಸಂಪಿಲ , ತುಳುನಾಡಿನ ಹೆಸರಾಂತ ನಾಟಕ ತಂಡವಾದ ಲಯನ್ ಡಿ ಕಿಶೋರ್ ಶೆಟ್ಟಿಯವರ ಶ್ರೀ ಲಲಿತೆ  ತಂಡದ ಕಲಾವಿದನಾಗಿ ಸೇರ್ಪಡೆಗೊಂಡು ಕಲಾ ಸೇವೆಯಲ್ಲಿ ತೊಡಗಿರುವುದು ನಮಗೆ ಹೆಮ್ಮೆಯ ಸಂಗತಿ. ಅವರ ಕಲಾ ಜಗತ್ತಿನ ಪಯಣ ಹೀಗೆ ಮುಂದುವರಿಯಲಿ ಹಾಗು ಅವರ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸುವ ಯುವಕ ಮಂಡಲ(ರಿ.) ಇರಾ

IMG-20180918-WA0000IMG-20180918-WA0001


ನಿಮ್ಮ ಟಿಪ್ಪಣಿ ಬರೆಯಿರಿ

ಯಕ್ಷರಂಗದ ಭರವಸೆಯ ಬಹುಮುಖ ಪ್ರತಿಭೆ ಮನ್ವಿತ್

ಇರಾ ಗ್ರಾಮವು ಹಲವು  ಪ್ರತಿಭೆಗಳ ಆಗರ,ಇದಕ್ಕೆ ಸಾಕ್ಷಿಯೆಂಬಂತೆ ನಾವು ಹಲವು ಯುವ ಪ್ರತಿಭೆಗಳನ್ನು ನಮ್ಮೂರಲ್ಲಿ ಕಾಣಬಹುದು. ಈ ಯುವ ಪ್ರತಿಭೆಗಳು ನಮ್ಮ ಯುವಕ ಮಂಡಲದ ಸದಸ್ಯರು ಎಂದು ಹೇಳಲು ನಾವು ಹೆಮ್ಮೆ ಪಡುತ್ತೇವೆ.

ಇಂತಹ ಯುವ ಪ್ರತಿಭೆಯಲ್ಲಿ ಇರಾ ಸಂಪಿಲದ ಮನ್ವಿತ್ ವೈ ಶೆಟ್ಟಿ ಒಬ್ಬರು. ದ.ಕ ಗಂಡುಕಲೆ ಯಕ್ಷಗಾನವನ್ನು  ತನ್ನ ಅಭಿರುಚಿ ಮಾಡಿಕೊಂಡು ಯಕ್ಷ ರಂಗದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ.

ಇವರು ಮಾಯಾ ಶೂರ್ಪಣಖ ಎಂಬ ಸ್ತ್ರೀ ಪಾತ್ರದಲ್ಲಿ ರಂಗಪ್ರವೇಶ ಮಾಡಿದರು. ಅಂದಿನಿಂದ ಇಂದಿನವರೆಗೆ  ಹಲವಾರು ಸ್ತ್ರೀ ಪುರುಷ ಪಾತ್ರಗಳಿಗೆ ಜೀವ ತುಂಬಿ ತಾನು ಒಬ್ಬ ಅಪ್ರತಿಮ ಕಲಾವಿದ ಎಂಬುದನ್ನು ನಿರೂಪಿದಿದ್ದಾರೆ.

ಮೊದಲು ತನ್ನ ಸ್ನೇಹಿತರಾದ ಗೌರವ್ , ಸಾರ್ಥಕ್, ಆದರ್ಶ್ ರಿಂದ ಯಕ್ಷಗಾನದ ಆಯಾಮಗಳನ್ನ ತಿಳಿದ ಇವರು ನಂತರ ನೃತ್ಯವನ್ನು ಗುರುಗಳಾದ ಉಬೆರಡ್ಕ ಉಮೇಶ್ ಅವರ ಗರಡಿಯಲ್ಲಿ ಅಭ್ಯಾಸಮಾಡಿದ್ದು, ಪ್ರಸ್ತುತ ಆಳ್ವಾಸ್ ಕಾಲೇಜ್ ನಲ್ಲಿ ತೆಂಕು ಮತ್ತು ಬಡಗು ನಾಟ್ಯ ತರಬೇತಿ ಪಡೆಯುತ್ತಿದ್ದು, ಯಕ್ಷಗಾನ ಹಿಮ್ಮೇಳವಾದ ಮದ್ದಳೆ ಚೆಂಡೆ ವಾದನದ ತರಬೇತಿಯ ಜತೆಗೆ ಪ್ರಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರಲ್ಲಿ ಭಾಗವತಿಕೆ ಅಭ್ಯಾಸ ಮಾಡುತ್ತಿದ್ದು ಮುಂದೆ ಯಕ್ಷಗಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧಕನಾಗೋದರಲ್ಲಿ ಸಂಶಯವಿಲ್ಲ.

ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣವನ್ನು ನಗರದ‌ ಪ್ರತಿಷ್ಠಿತ ರಾಮಕೃಷ್ಣ ಶಾಲೆಯಲ್ಲಿ ಪೋರೈಸಿ ಸದ್ಯಕ್ಕೆ ಯಕ್ಷಗಾನ ಹಾಗು‌ ಕ್ರೀಡೆಗೆ ಹೆಸರುವಾಸಿಯಾದ ಮೂಡಬಿದಿರೆಯ ಅಳ್ವಾಸ್  ಕಾಲೇಜ್ ನಲ್ಲಿ ಪಿ ಯು ಸಿ ವ್ಯಾಸಾಂಗ ಮಾಡುತ್ತಿದ್ದಾರೆ.

ಇತ್ತಿಚಿನ ದಿನಗಳಲ್ಲಿ ನಾಟಕ ರಂಗ ಭೂಮಿಯಕಡೆಗೆ ತಮ್ಮ ಒಲವು ತೋರಿಸಿದ್ದು , ಹಲವಾರು ಕಾರ್ಯಕ್ರಮ ಗಳನ್ನು ನೀಡಿದ್ದು. ತಾನು ಯಕ್ಷಗಾನಕ್ಕೂ ಸೈ ಜತೆಗೆ ನಾಟಕಕ್ಕೂ ಸೈ ಎಂಬುದನ್ನು ನಿರೂಪಿಸಿದ್ದಾರೆ.

ಇವರು ಇರಾ ಗ್ರಾಮದ ಸಂಪಿಲ ಯತಿರಾಜ್ ಶೆಟ್ಟಿ ಮತ್ತು ಭಾನುರೇಖ ವೈ ಶೆಟ್ಟಿ ದಂಪತಿಗಳ  ದ್ವಿತೀಯ ಪುತ್ರ