ಇರಾ ಗ್ರಾಮವು ಹಲವು ಸಾಧಕರ ನಾಡು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರಿತಿಸಿಗೊಂಡಿದೆ ಆ ಸಾಧಕರ ಸಾಲಿಗೆ ಇರಾ ಗ್ರಾಮದ ಗೌರವ್ ಕೊಟ್ಟಾರಿ ಮತ್ತು ಆದರ್ಶ್ ಪಕ್ಕಳ ಎಂಬ 18ರ ಯುವಕರು ಸೇರ್ಪಡೆಗೊಂಡಿದ್ದಾರೆ. ಇವರು ನಮ್ಮ ಯುವಕ ಮಂಡಲದ ಸದಸ್ಯರು ಎಂದು ಹೇಳಲು ನಾವು ಹೆಮ್ಮೆ ಪಡುತ್ತೇವೆ.
ದ.ಕ ಗಂಡುಕಲೆ ಯಕ್ಷಗಾನವನ್ನು ತನ್ನ ಅಭಿರುಚಿ ಮಾಡಿ ಹಲವಾರು ಬಯಲಾಟ ನೀಡಿದ ಹಾಗೂ ಶಿಕ್ಷಣದಲ್ಲಿ ಉತ್ತಮ ಅಂಕಗಳಿಸಿದ ಗೌರವ್ ಕೊಟ್ಟಾರಿ ಹಾಗು ಆದರ್ಶ್ ಪಕ್ಕಳ ಅವರನ್ನು ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ) ಪ್ರತಿಭಾ ಪುರಸ್ಕಾರ ಮಾಡಿ ಸನ್ಮಾನಿಸಲಾಯಿತು.
ಗೌರವ್ ಕೊಟ್ಟಾರಿ 23-12-2009 ರಂದು ವಿಷ್ಣುವಿನ ಪಾತ್ರದಲ್ಲಿ ರಂಗಪ್ರವೇಶ ಮಾಡಿದರು. ಅಂದು ಬಣ್ಣಹಚ್ಚಿ ಶುರುವಾದ ಈ ಯಕ್ಷಗಾನದ ಜೊತೆಗಿನ ನಂಟಿಗೆ ಇಂದಿಗೆ ಎಂಟು ವರ್ಷ ತುಂಬಿದ್ದು ಅವರು ಯಕ್ಷಗಾನದಲ್ಲಿ ಮಾಡದ ಪಾತ್ರಗಳಿಲ್ಲ ವಿಷ್ಣು, ಅರ್ಜುನ, ಹನುಮಂತ, ಬ್ರಹ್ಮ, ಕೃಷ್ಣ, ಚಂಡಾಸುರ, ಹಿರಣ್ಯಕಶ್ಯಪ, ರಾವಣ, ಮಹಿಷಾಸುರ,ವಿದ್ಯುನ್ಮಾಲಿ, ಕಾರ್ತ್ಯವಿರ್ಯಾರ್ಜುನ, ಹೀಗೆ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ.ಯಕ್ಷಗಾನದ ಗುರುಗಳಾದ ಯೋಗಿಶ್ ಅಚಾರ್ಯ,ಹಳೆಯಂಗಡಿ ಸತೀಶ್ ಮಡಿವಾಳ ಕಾರ್ಕಳ,ಉಬೆರಡ್ಕ ಉಮೇಶ್ ,ಗಣೇಶ್ ಅಚಾರ್ಯ ಗರಡಿಯಲ್ಲಿ ಪಳಗಿದ್ದು ಈ ಪ್ರತಿಭೆ ಚಂದ್ರ ಶೇಖರ್ ಧರ್ಮಸ್ಥಳ ಗೌರವ್ ಕೊಟ್ಟಾರಿಯ ಯಕ್ಷಗಾನದ ರೋಲ್ ಮೋಡಲ್ . ಪ್ರಾಥಮಿಕ ಶಿಕ್ಷಣವನ್ನು ಪ್ರಗತಿ ಸೊಲ್ಕ್ ಕುಕ್ಕಾಜೆಯಲ್ಲಿ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಶಾರದ ಪಿಯು ಕಾಲೇಜ್ ನಲ್ಲಿ ಸದ್ಯಕ್ಕೆ ಸೈಂಟ್ ಅಲೋಶಿಯಸ್ ಕಾಲೇಜ್ ನಲ್ಲಿ BSc ಮಾಡುತ್ತಾರೆ. 2013-2014 ಸಾಲಿನ ಯಕ್ಷಗಾನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಹಾಗೂ 2016-17 ಸಾಲಿನ ಪಿಯು ಹಂತದ ಇಂಟರ್ ಡಿಸ್ಟ್ರಿಕ್ಟ್ ಯಕ್ಷಗಾನದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದುಕೊಟ್ಟರು.ಇವರ ಶೈಕ್ಷಣಿಕ ಸಾಧನೆ ನೋಡಿದಾಗ ಕಲಿಕೆಯ ಜೊತೆ ಅಭಿರುಚಿಯ ಅಧಾವ ಅಭಿರುಚಿ ಜೊತೆ ಕಲಿಕೆ ಅನ್ನುವ ಗೊಂದಲ ಮೂಡುತ್ತವೆ ಎಸ್ಸಲ್ಸಿ 96% ಪಿಯು ನಲ್ಲಿ 97 % ಉತ್ತಮ ಅಂಕಗಳನ್ನು ಪಡೆದು ಮಿಂಚಿದ್ದಾರೆ. ಇತ್ತಿಚಿನ ದಿನಗಳಲ್ಲಿ ಫೋಟೋಗ್ರಫಿ ಯಕಡೆಗೆ ತಮ್ಮ ಒಲವು ತೋರಿಸಿದ್ದು , ಹತ್ತು ಹಲವಾರು ಛಾಯಾಚಿತ್ರಗಳನ್ನು ತೆಗೆದು ಭವಿಷ್ಯದಲ್ಲಿ ಹವ್ಯಾಸಿ ಪೋಟೋಗ್ರಾಫರ್ ಆಗಿ ಹೆಸರುಮಾಡುವುದರಲ್ಲಿ ಸಂಶಯವಿಲ್ಲ.ಇವರು ಇರಾ ಗ್ರಾಮದ ಸಂಪಿಲದ ಗಣೇಶ್ ಕೊಟ್ಟಾರಿ ಹಾಗೂ ಹೇಮಲತಾ .ಜಿ. ಕೊಟ್ಟಾರಿ ದಂಪತಿಗಳ ಪ್ರಥಮ ಪುತ್ರ
ಆದರ್ಶ್ ಪಕ್ಕಳ 23-12-2009 ರಂದು ಸುದರ್ಷಣನ ಪಾತ್ರದಲ್ಲಿ ರಂಗಪ್ರವೇಶ ಮಾಡಿದರು. ಅಂದು ಬಣ್ಣಹಚ್ಚಿ ಶುರುವಾದ ಈ ಯಕ್ಷಗಾನದ ಜೊತೆಗಿನ ನಂಟಿಗೆ ಇಂದಿಗೆ ಎಂಟು ವರ್ಷ ತುಂಬಿದ್ದು ಅವರು ಯಕ್ಷಗಾನದಲ್ಲಿ ಮಾಡದ ಪಾತ್ರಗಳಿಲ್ಲ ರಾಮ, ಶತ್ರುಘ್ನ, ದ್ರೋಣ, ಬಬ್ರುವಾಹನ, ಶಿವ, ದಕ್ಷ, ದೇವಿ, ಕೃಷ್ಣ, ಮುಂಡಾಸುರ, ಹಿರಣ್ಯಕಷ್ಯಪ, ರಾವಣ, ಮಹಿಷಾಸುರ, ಮುರಾಸುರ, ಸುದರ್ಷಣ, ಹೀಗೆ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ.ಇವರ ಮೊದಲ ಗುರು ಹವ್ಯಾಸಿ ಕಲಾವಿದರಾದ ಇವರ ಅಜ್ಜ ಶ್ರೀ ಮಹಾಬಲ ಪಕ್ಕಳ , ಜತೆಗೆ ಹವ್ಯಾಸಿ ಕಲಾವಿದರಾದ ತಂದೆ ಶ್ರೀ ಸತೀಶ್ ಪಕ್ಕಳರಿಂದ ಯಕ್ಷಗಾನದ ಆಯಾಮಗಳನ್ನ ತಿಳಿದ ಇವರು ನಂತರ ನೃತ್ಯವನ್ನು ಗುರುಗಳಾದ ಯೋಗಿಶ್ ಅಚಾರ್ಯ,ಹಳೆಯಂಗಡಿ ಸತೀಶ್ ಮಡಿವಾಳ ಕಾರ್ಕಳ,ಉಬೆರಡ್ಕ ಉಮೇಶ್ ,ಗಣೇಶ್ ಅಚಾರ್ಯ ಗರಡಿಯಲ್ಲಿ ಅಭ್ಯಾಸಮಾಡಿದ್ದು, ಮುಂದೆ ಯಕ್ಷಗಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧಕನಾಗೋದರಲ್ಲಿ ಸಂಶಯವಿಲ್ಲ.ಪ್ರಾಥಮಿಕ ಶಿಕ್ಷಣವನ್ನು ಪ್ರಗತಿ ಸೊಲ್ಕ್ ಕುಕ್ಕಾಜೆಯಲ್ಲಿ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಯಕ್ಷಗಾನ ಚಟುವಟಿಕೆಗೆ ಹೆಸರುವಾಸಿಯಾಗಿರುವ ವಿವೇಕಾನಂದ ಪಿಯು ಕಾಲೇಜ್ ನಲ್ಲಿ ಪೋರೈಸಿ ಸದ್ಯಕ್ಕೆ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಎಲೆಕ್ಟ್ರಾನಿಕ್ಸ್ ನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದಾರೆ. 2012-2013 ಸಾಲಿನ ಪ್ರತೀಭಾ ಕಾರಂಜಿ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದುಕೊಟ್ಟ ಇವರನ್ನು ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ.ಇವರ ಶೈಕ್ಷಣಿಕ ಸಾಧನೆ ನೋಡಿದಾಗ ಕಲಿಕೆಯ ಜೊತೆ ಅಭಿರುಚಿಯ ಅಧಾವ ಅಭಿರುಚಿ ಜೊತೆ ಕಲಿಕೆ ಅನ್ನುವ ಗೊಂದಲ ಮೂಡುತ್ತವೆ ಎಸ್ಸಲ್ಸಿ 96% ಪಿಯು ನಲ್ಲಿ 94% ಉತ್ತಮ ಅಂಕಗಳನ್ನು ಪಡೆದು ಮಿಂಚಿದ್ದಾರೆ. ಇತ್ತಿಚಿನ ದಿನಗಳಲ್ಲಿ ಪಾಶ್ಚಾತ್ಯ ನೃತ್ಯದಕಡೆಗೆ ತಮ್ಮ ಒಲವು ತೋರಿಸಿದ್ದು , ಹತ್ತು ಹಲವಾರು ಕಾರ್ಯಕ್ರಮ ಗಳನ್ನು ನೀಡಿದ್ದು. ತಾನು ಯಕ್ಷಗಾನಕ್ಕೂ ಸೈ ಜತೆಗೆ ನೃತ್ಯಕ್ಕೂ ಸೈ ಎಂಬುದನ್ನು ನಿರೂಪಿಸಿದ್ದಾರೆ.ಇವರು ಇರಾ ಗ್ರಾಮದ ಕುರಿಯಾಡಿಯ ಸತೀಶ್ ಪಕ್ಕಳ ಹಾಗೂ ಶಶಿಕಲಾ .ಎಸ್. ಪಕ್ಕಳ ದಂಪತಿಗಳ ದ್ವಿತೀಯ ಪುತ್ರ

ಗೌರವ್ ಜಿ ಕೊಟ್ಟಾರಿ

ಆದರ್ಶ್ ಪಕ್ಕಳ