ಭಾರತದ ಇತಿಹಾಸದಲಿ
ಶೌರ್ಯದಿಂದ ಮೆರೆದ ನಾಡು ಕರ್ನಾಟಕ !
ಗಂಗ, ಕದಂಬ , ಚಾಲುಕ್ಯರು ಆಳಿದ ನಾಡು
ಪಂಪ, ರನ್ನ, ಜನ್ನರಿಂದ ಬೆಳಗಿದ ನಾಡು !
ಸತ್ಯ, ಶಾಂತಿ , ಧರ್ಮದಿಂದ ಕೂಡಿದ ನಾಡು
ಕಲೆ ವಿಜ್ಞಾನ ಸಾಹಿತ್ಯದ ಭಂಡಾರದ ಬೀಡು !
ಬೇಲೂರು ಹಳೇಬೀಡಿರುವ ಶಿಲ್ಪಕಲೆಯ ನಾಡು
ಜೋಗ ಜಲಪಾತವಿರುವ ಶ್ರೀ ಗಂಧದ ಬೀಡು !
ಗೋದಾವರಿ ಕೃಷ್ಣ ಕಾವೇರಿ ತುಂಬಿ ಹರಿವ ನಾಡು
ಮನಸೋರೆಗೊಳ್ಳುವ ಕರಾವಳಿಯ ಬೀಡು !
ಬೇರೆ ಬೇರೆ ಧರ್ಮಗಳಿರುವ ಸುಂದರ ನಾಡು
ನಾನಾ ಭಾಷಿಗರಿರುವ ಕನ್ನಡ ನಾಡು !
ಈ ನಮ್ಮ ಕರ್ನಾಟಕ ಬಂಗಾರದ ಬೀಡು
ಜನರೆಲ್ಲಾ ನೆಚ್ಚಿರುವ ನಲ್ಮೆಯ ನಾಡು. !
ರಚನೆ: ಅಶ್ವಿತ್ ಕೊಟ್ಟಾರಿ ಇರಾ