ಯುವಕ ಮಂಡಲ (ರಿ.) , ಇರಾ

ಇದು ಯುವ ಶಕ್ತಿಯ ಕೇಂದ್ರ


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾಗಿ ಸೂರ್ಯಪ್ರಕಾಶ್ ರೈ ಪುನರಾಯ್ಕೆ

ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ವಾರ್ಷಿಕ ಮಹಾ ಸಭೆ ದಿನಾಂಕ 28-08-2022 ರಂದು ಇರಾ ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ವಾರ್ಷಿಕ ಆಯವ್ಯಯಗಳನ್ನು ಮಂಡಿಸಲಾಯಿತು. ನಂತರ 2022-23 ಅವಧಿಗೆ ನೂತನ ಸದಸ್ಯರನ್ನು ಒಮ್ಮತದಿಂದ ಆಯ್ಕೆ‌ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಮಂಜುನಾಥ ಡಿ ಶೆಟ್ಟಿ, ಅಧ್ಯಕ್ಷರಾಗಿ ಸೂರ್ಯಪ್ರಕಾಶ್ ರೈ, ಉಪಾಧ್ಯಕ್ಷರಾಗಿ ಭರತರಾಜ್ ರೈ, ಕಾರ್ಯದರ್ಶಿಗಳಾಗಿ ಚರಣ್ ಪಕ್ಕಳ ಮತ್ತು ದೇವಿಪ್ರಸಾದ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾಗಿ ನಿತೇಶ್ ಶೆಟ್ಟಿ ಮತ್ತು ವಿನೋದ್ ಕೆಂಜಿಲಾ, ಸಂಘಟನಾ ಕಾರ್ಯದರ್ಶಿಯಾಗಿ ರಾಜಶೇಖರ್ ರೈ, ಖಜಾಂಚಿಯಾಗಿ ಜಗದೀಶ್ ನಾಯರ್ ಕೋಡಿ ಮತ್ತಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಜ್ರಾಕ್ಷ ಟಿ. ಈ ಸಂದರ್ಭದಲ್ಲಿ ಭಜನಾ‌ ಮಂಡಳಿಯ‌ ಸದಸ್ಯರು ಹಾಗು ಊರಿನ ಗಣ್ಯರು ಉಪಸ್ಥಿತರಿದ್ದರು.


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಪ್ರಸೀನ್ ಶೆಟ್ಟಿ ಆಚೆಬೈಲು

ಊರಿನ ಪ್ರತಿಷ್ಠಿತ ಯುವ ಸಂಘಟನೆಯಾದ ನಮ್ಮ ಯುವಕ ಮಂಡಲ (ರಿ.) ಇರಾ ಇದರ ವಾರ್ಷಿಕ ಮಹಾಸಭೆಯನ್ನು  ಇರಾ ಯುವಕ ಮಂಡಲದ ವಠಾರದಲ್ಲಿ ಸರಕಾರದ ಕಾರ್ಯ ಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ನಮ್ಮ ಸಂಘದ ಹಿರಿಯ ಸದಸ್ಯ, ನಮ್ಮೆಲ್ಲರ‌ ಮಾರ್ಗದರ್ಶಿ ಶ್ರೀಯುತ ವೈ ಬಿ ಸುಂದರ್ ವಹಿಸಿದ್ದರು. ಸಭೆಯಲ್ಲಿ ಇತ್ತಿಚೆಗೆ ನಮ್ಮನಗಲಿದ ಸಂಘದ ಸದಸ್ಯ ಶ್ರೀ ಜಯಕಿಶೋರ್ ಶೆಟ್ಟಿ ಅಲ್ಕೀರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ನಂತರ ಸಂಘದ ವಾರ್ಷಿಕ ಆಯ ವ್ಯಯಗಳನ್ನು ಕಾರ್ಯದರ್ಶಿ ನಿತೇಶ್ ಶೆಟ್ಟಿ ನೇತೃತ್ವದಲ್ಲಿ ಮಂಡಿಸಲಾಯಿತು. ನಂತರ ಯುವಕ ಮಂಡಲದ 2020-21ರ ಸಾಲಿನ ನೂತನ ಪಧಾದಿಕಾರಿಗಳನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಆರಿಸಲಾಯಿತು. ನೂತನ ಅಧ್ಯಕ್ಷರಾಗಿ ಶ್ರೀ ಪ್ರಸೀನ್ ಶೆಟ್ಟಿ ಆಚೆಬೈಲು, ಉಪಾಧ್ಯಕ್ಷ ರಾಗಿ ಶ್ರೀ ನಾಗೇಶ್ ಭಂಡಾರಿ, ಕಾರ್ಯದರ್ಶಿಯಾಗಿ ಶ್ರೀ ನಿಖಿಲ್ ಕೊಟ್ಟಾರಿ, ಜತೆ ಕಾರ್ಯದರ್ಶಿಯಾಗಿ ಶ್ರೀ ಮನ್ವಿತ್ ವೈ ಶೆಟ್ಟಿ, ಕೋಶಾಧಿಕಾರಿಯಾಗಿ ಶ್ರೀ ಭರತ್ ರಾಜ್ ರೈ , ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀ ಗೌರವ್ ಕೊಟ್ಟಾರಿ ಮತ್ತು ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀ ಅದ್ರಾಮ ಡಿ ಆಯ್ಕೆ ಯಾದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಶ್ರೀ ಗಣೇಶ್ ಕೊಟ್ಟಾರಿ ಸಂಪಿಲ, ಶ್ರೀ ಸುರೇಶ್ ಕೊಟ್ಟಾರಿ, ಶ್ರೀ ಯತಿರಾಜ್ ಶೆಟ್ಟಿ ಸಂಪಿಲ, ಶ್ರೀ ವಾಮನ ಪೂಜಾರಿ ಟಿ, ಸಂಘದ ಅಧ್ಯಕ್ಷ ಚರಣ್ ಪಕ್ಕಳ ಹಾಗು ಸಂಘದ ಸರ್ವಸದಸ್ಯರು ಉಪಸ್ಥಿತರಿದ್ದರು.

image-01


ನಿಮ್ಮ ಟಿಪ್ಪಣಿ ಬರೆಯಿರಿ

ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಚರಣ್ ಪಕ್ಕಳ ಆಯ್ಕೆ

ಯುವಕ ಮಂಡಲ(ರಿ.) ಇರಾ ಇದರ ವಾರ್ಷಿಕ ಮಹಾಸಭೆಯು ದಿನಾಂಕ 28-07-2019ರಂದು ಸಂಘದ ಕಛೇರಿಯಲ್ಲಿ ಸಂಘದ ಹಿರಿಯ ಸದಸ್ಯ ಶ್ರೀ ರಾಮಯ್ಯ ಶೆಟ್ಟಿ ಸಂಪಿಲಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಪ್ರವೀಣ್ ವೈ ಬಿ ಸಂಘದ 2018-19ರ ಕಾರ್ಯ ಚಟುವಟಿಕೆಗಳ ಆಯವ್ಯಯಗಳನ್ನು ಮಂಡಿಸಲಾಯಿತು. ಜತೆಗೆ 2019-20ರ ಅವಧಿಗೆ ನೂತನ‌ ಅಧ್ಯಕ್ಷರಾಗಿ ಚರಣ್ ಪಕ್ಕಳ, ಉಪಾಧ್ಯಕ್ಷರಾಗಿ ನಿಖಿಲ್ ಕೊಟ್ಟಾರಿ, ಕಾರ್ಯದರ್ಶಿಯಾಗಿ ನಿತೇಶ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಅಶ್ವಿತ್ ಕೊಟ್ಟಾರಿ, ಕೋಶಾಧಿಕಾರಿ ಯಾಗಿ ವರದರಾಜ್ ಎಂ, ಕ್ರೀಡಾ ಕಾರ್ಯದರ್ಶಿಯಾಗಿ ಅದ್ರಾಮ ಡಿ, ಜತೆ ಕ್ರಿಡಾ ಕಾರ್ಯದರ್ಶಿಯಾಗಿ ಅಮನ್ ಶೆಟ್ಟಿ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆದರ್ಶ್ ಪಕ್ಕಳ ಅವರನ್ನು ಬಹುಮತದಿಂದ ಆರಿಸಲಾಯಿತು. ಜತೆಗೆ 2019-20ರ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.‌ ಈ ಸಂದರ್ಭದಲ್ಲಿ ಸಂಘದ ಹಿರಿಯ ಹಾಗು ಕಿರಿಯ ಸದಸ್ಯರು ಉಪಸ್ಥಿತರಿದ್ದರು.


ನಿಮ್ಮ ಟಿಪ್ಪಣಿ ಬರೆಯಿರಿ

ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ವಾಮನ ಡಿ ಆಯ್ಕೆ.

ಯುವಕ ಮಂಡಲ(ರಿ.) ಇರಾ ಇದರ 2018-19 ರ ಸಾಲಿನ‌‌ ವಾರ್ಷಿಕ ‌ಮಹಾಸಭೆ ಹಾಗೂ ನೂತನ ಪಧಾದಿಕಾರಿಗಳ ಪದಗ್ರಹಣ ನಿನ್ನೆ ಸಂಜೆ ಯುವಕ‌ ಮಂಡಲದ ಕಛೇರಿಯಲ್ಲಿ ಸಂಘದ ಹಿರಿಯ ಸದಸ್ಯರಾದ ಯತಿರಾಜ್‌ ಶೆಟ್ಟಿ ಸಂಪಿಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ಇದೇ ಸಂದರ್ಭದಲ್ಲಿ ಮಂಜೂರು ಮಾಡಲಾಯಿತು. 2018-19ರ ಸಾಲಿಗೆ ನೂತನ‌ ಅಧ್ಯಕ್ಷರಾಗಿ ಶ್ರೀ ವಾಮನ ಡಿ ಅವರನ್ನು‌‌ ಬಹುಮತದಿಂದ ಆಯ್ಕೆ ಮಾಡಲಾಯಿತು. ‌ ಕಾರ್ಯದರ್ಶಿಯಾಗಿ ಪ್ರವೀಣ್ ವೈ ಬಿ ಬಹುಮತದಿಂದ ಆಯ್ಕೆಯಾದರು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶೈಲೇಶ್ ರೈ ಹಾಗು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

IMG-20180805-WA0019IMG-20180805-WA0018IMG-20180805-WA0023IMG-20180805-WA0020IMG-20180805-WA0021IMG-20180805-WA0026